S.NARAYAN TAKES BACK HIS DECISION
Posted date: 27 Wed, Jun 2012 ? 10:03:27 AM

Prominent director producer actor multifaceted S.Narayan has taken back his  decision of rectirement from film direction and production and production.  It is because of affection and admiration  from industry he has changed his mind. Welcom back S. Narayanji.

ನಾರಾಯಣ್ ನಿವೃತ್ತಿ ವಾಪಸ್ಸ್ – ಪ್ರಮುಖರ ಹರ್ಷ

ಅತ್ಯಂತ ಆತ್ಮೀಯರ ಪ್ರೀತಿ ವಿಶ್ವಾಸಕ್ಕೆ ತಲೆಬಾಗಿ ಹೆಸರಾಂತ ನಿರ್ದೇಶಕ ಹಾಗೂ ನಿರ್ಮಾಪಕ ಬಹುಮುಖಿ ಎಸ್ ನಾರಾಯಣ್ ಅವರು ಈ ಹಿಂದೆ ಘೋಶಿಸಿದ್ಧ ನಿವೃತ್ತಿಯನ್ನು ವಾಪಸ್ ಪಡೆಯಲು ತೀರ್ಮಾನಿಸಿದ್ದಾರೆ.

ಎಸ್ ನಾರಾಯಣ್ ಅವರು ತಮಗೆ ಆದ ನೋವು ಹಾಗೂ ಸಂಕಟದಿಂದ ಏಪ್ರಿಲ್ ಮೊದಲ ವಾರದಲ್ಲಿ ವೃತ್ತಿಯಿಂದ ನಿವೃತ್ತಿಯನ್ನು ಪ್ರಕಟಿಸಿದ್ದರು. ಅದಾದ ನಂತರ ಅನೇಕ ವ್ಯಕ್ತಿಗಳು ಅವರನ್ನು ಸಂಪರ್ಕಿಸಿ ನಿರ್ಧಾರವನ್ನು ಹಿಂದೆ ಪಡೆಯಲು ಕೇಳಿಕೊಂಡಿದ್ದರು. ಇತ್ತೀಚಿನ ಅಂಬಿ ಸಂಭ್ರಮ ಎಸ್ ನಾರಾಯಣ್ ಉಸ್ತುವಾರಿಯಲ್ಲಿ ನಡೆದಾಗಲೆ ಶ್ರೀಯುತ ಅಂಬರೀಶ್ ಅವರು ನಾರಾಯಣ್ ನಿವೃತ್ತಿ ಸಂಕಲ್ಪವನ್ನು ಹಿಂದೆ ಪಡೆಯಬೇಕು ಎಂದು ಕೇಳಿಕೊಂಡಿದ್ದರು. ಅಂಬಿ ಸಂಭ್ರಮ ನಂತರ ಔತಣ ಕೂಟದಲ್ಲಿ ಅಂಬರೀಶ್ ಅವರು ಎಸ್ ನಾರಾಯಣ್ ಅವರಿಂದ ನಿವೃತ್ತಿ ವಿಚಾರವನ್ನು ಪ್ರಸ್ಥಾಪಿಸಿ ನೀವು ಖಂಡಿತವಾಗಿ ನಮ್ಮ ಜೊತೆಯಲ್ಲಿ ಇರಬೇಕು ಹಾಗೂ ನಿಮ್ಮ ಜೊತೆಯಲ್ಲಿ ನಾವಿದ್ದೇವೆ ಎಂದು ಒತ್ತಾಯ ಮಾಡಿದಾಗ ಎಸ್ ನಾರಾಯಣ್ ಆ ಪ್ರೀತಿ ವಿಶ್ವಾಸಕ್ಕೆ ಎದುರಾಗಿ ನಿಲ್ಲಲಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಕಳೆದ 22 ವರ್ಷಗಳ ಕನ್ನಡ ಸಿನಿಮಾ ವೃತ್ತಿಯಲ್ಲಿ ಎಸ್ ನಾರಾಯಣ್ ಹಲವಾರು ಸ್ನೇಹಿತರನ್ನು, ಹಿತೈಷಿಗಳನ್ನು ಗಳಿಸಿರುವರು. ಅವರೆಲ್ಲರ ಅಪೇಕ್ಷೆಗೆ ಕೇಂದ್ರವಾಗಿ ಅಂಬರೀಶ್ ಅವರು ಎಸ್ ನಾರಾಯಣ್ ಅವರ ಮನವೊಲಿಸಿ ನಿವೃತಿಯನ್ನು ವಾಪಸ್ ಪಡೆಯುವಂತೆ ಕಾರ್ಯ ನಿರ್ವಹಿಸಿದ್ದಾರೆ. ಟ್ಯಾಲೆನ್ಟ್ ಇರುವರು ಇಷ್ಟು ಬೇಗ ನಿವೃತ್ತಿ ಪಡೆಯಬಾರದು ಎಂಬುದು ಅಂಬಿ ಆಶಯವು ಆಗಿತ್ತು.

ವೃತಿಯಲ್ಲಿ ಶಿಸ್ತು, ಸಂಯಮ, ಶ್ರದ್ದೆ, ಬುದ್ದಿವಂತಿಕೆಯ ಸಮ್ಮಿಲನ ಆಗಿರುವ ಎಸ್ ನಾರಾಯಣ್ ಅವರು ನಿವೃತ್ತಿಯ ನಿರ್ಧಾರ ಮಾಡಲೇ ಬಾರದಿತ್ತು ಎಂದು ಹೇಳುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಈಗ ಅವರ ನಿರ್ಧಾರ ಬದಲಿಸಿದ್ದು ಖುಷಿಯ ವಿಚಾರ ಎಂದು ಹೇಳಿದ್ದಾರೆ.

ಚೈತ್ರದ ಪ್ರೇಮಾಂಜಲಿ ಇಂದ ಮುಂಜಾನೆ ವರೆಗೂ ಎಸ್ ನಾರಾಯಣ್ ಹಲವು ಯಶಸ್ವಿ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಹಲವಾರು ಚಿತ್ರ ಸಂಬಂದಿ ಚಟುವಟಿಗೆಗಳಲ್ಲಿ ತೊಡಗಿಸಿಕೊಂಡು ಸಂವೃದ್ದವಾಗಿ ಕೆಲಸ ಮಾಡಿರುವರು ಅನೇಕ ಶಿಷ್ಯರನ್ನುಕೊಡುಗೆಯಾಗಿ ಪರಿಚಯ ಮಾಡಿರುವರು. ಅವರ ಅಪ್ಪಯ್ಯ ಚಿತ್ರ ಬಿಡುಗಡೆಗೆ ಸಿದ್ದವಾಗುತ್ತಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed